ಮಹೇಶ್ ಚಂದ್ರ ಡ್ರೀಮ್ಸ್ ಆನ್ ಲಿಮಿಟೆಡ್ ಸಂಸ್ಥೆಯ ಪ್ರಥಮ ಕಾಣಿಕೆ ‘ಮಸ್ತ್ ಕಲಂದರ್’...ನಂ ಕಥೆ ನಿಮ್ ಜೊತೆ ತುಮಕೂರು ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ೯೦ ರಷ್ಟು ಮುಗಿಸಿ ಈಗ ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ೧೬ ಅಡಿ ಕಟ್ ಔಟ್ ಮುಂದೆ ಸುರಿಯುವ ಮಳೆಯಲ್ಲಿ ಒಂದು ಹಾಡನ್ನು ಚಿತ್ರೀಕರಣ ಮಾಡಲಿದೆ.
ಚಿತ್ರದ ನಾಯಕ ನಿತಿನ್ ಗೌಡ ಹಾಗೂ ನಾಯಕಿ ಸ್ವರೂಪಿಣಿ ಅವರುಗಳು ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಅವರ ಅಭಿಮಾನಿಗಳು. ಹಾಗಾಗಿ ಚಿತ್ರದಲ್ಲೂ ಸಹ ವಿ ರವಿಚಂದ್ರನ್ ಅವರ ಸಿನಿಮಾಗಳ ಬಗ್ಗೆ ಮಾತುಗಳು ಇರುತ್ತವೆ. ಅದೇ ಅಲ್ಲದೆ ಒಂದು ಹಾಡಿನಲ್ಲಿ ವಿ ರವಿಚಂದ್ರನ್ ಕುರಿತಾಗಿ ಚಿತ್ರೀಕರಣ ಮಾಡಲಾಗುವುದು.
ಎ ಆರ್ ರೆಹಮಾನ್ ಅವರ ಮ್ಯೂಜಿಕ್ ಆಕಾಡೆಮೆ ಅಲ್ಲಿ ಮುಖ್ಯಸ್ಥರಾಗಿರುವ ಎಸ್ ಪ್ರೇಂಕುಮಾರ್ ಅವರ ರಾಗ ಸಂಯೋಜನೆ ಆರು ಹಾಡು ಹಾಗೂ ಮೂರು ಬಿಟ್ ಗೀತೆಗಳನ್ನು ಒಳಗೊಂಡಿದೆ.
‘ದೃಶ್ಯ ಹಾಗೂ ಪ್ಲೇಯೆರ್ಸ್’ ಚಿತ್ರಗಳ ನಟಿ ಸ್ವರೂಪಿಣಿ ಈ ಚಿತ್ರದ ಕಥಾ ನಾಯಕಿ. ನಿತಿನ್ ಗೌಡ ಈ ಚಿತ್ರದ ನಾಯಕ. ಸಿದ್ಲಿಂಗು ಶ್ರೀಧರ್, ಮಿತ್ರ, ಪ್ರಶಾಂತ್, ರಜನಿಕಾಂತ್ ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ.
ಪ್ರಥಮ ನಿರ್ದೇಶನಕ್ಕೂ ಮುಂಚೆ ರಾಜಕುಮಾರ್ ಆದಿತ್ಯ ಅವರು ಸಹ ನಿರ್ದೇಶಕರಾಗಿ, ಗೀತ ರಚನೆಗಾರರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಟಿ ವಿ ಕುಮಾರಸ್ವಾಮಿ (ತುಮಕೂರು), ಲೀಯ ಕೆ ಸ್ವಾಮಿ, ಎನ್ ಮಹೇಶ್, ಚಂದ್ರು ಎಸ್ ಎಲ್ ಅವರು ಈ ಚಿತ್ರದ ನಿರ್ಮಾಪಕರುಗಳು.
ಚಂದ್ರು ಎಸ್ ಎಲ್ ಅವರ ಕಥಾ ರಚನೆ ಹಾಗೂ ಗೀತೆಗಳು ಈ ಚಿತ್ರಕ್ಕಿದೆ. ಕಾಂತರಾಜು ಸಂಕಲನ, ಹರಿ ಕೃಷ್ಣ ನೃತ್ಯ ನಿರ್ದೇಶನ,ಸಹಾಯಕ ನಿರ್ದೇಶಕರಾಗಿ ಶ್ರೀಧರ್ ಎಸ್ ಎಲ್, ಲೋಕೇಶ್, ಎಸ್. ಮಣೂರ್ ಜೊತೆಯಾಗಿದ್ದಾರೆ. ವೀರೇಶ್ ಅವರ ಮೇಲ್ವಿಚಾರಣೆ ಸಹಾಯ ‘ಮಸ್ತ್ ಕಲಂದರ್’ ಸಿನಿಮಾಕ್ಕೆ ಇದೆ.